26 August 2021 KANNADA Murli Today | Brahma Kumaris

Read and Listen today’s Gyan Murli in Kannada

August 25, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಗ್ಯಾರಂಟಿ ಕೊಡುತ್ತೀರಿ, ನಾವು ನಮ್ಮದೇ ಯೋಗಬಲದಿಂದ ಈ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ, ಅಲ್ಲಿ ಒಂದು ಧರ್ಮ - ಒಂದು ರಾಜ್ಯವಿರುತ್ತದೆ”

ಪ್ರಶ್ನೆ:: -

ಮಾಯೆಯ ಯಾವ ವಿಘ್ನದಿಂದ ಸುರಕ್ಷಿತರಾಗಿರುವವರು ಬಹಳ ಒಳ್ಳೆಯ ಚಮತ್ಕಾರ ಮಾಡಬಹುದಾಗಿದೆ?

ಉತ್ತರ:-

ಓಂ ಶಾಂತಿ. ತಂದೆಯು ಆತ್ಮಿಕ ಮಕ್ಕಳಿಗೆ ಶ್ರೀಮತವನ್ನು ಕೊಡಲು ಬಂದಿದ್ದಾರೆ. ಇದು ಮಕ್ಕಳಿಗೆ ತಿಳಿದಿದೆ – ಸ್ವಲ್ಪ ಸಮಯದಲ್ಲಿಯೇ ಡ್ರಾಮಾನುಸಾರ ಎಲ್ಲಾ ಕಾರ್ಯವು ಆಗಬೇಕಾಗಿದೆ, ನಾವು ರಾವಣ ಪುರಿಯನ್ನು ವಿಷ್ಣು ಪುರಿಯನ್ನಾಗಿ ಮಾಡುತ್ತೇವೆ. ತಂದೆಯೂ ಗುಪ್ತವಾಗಿದ್ದಾರೆ, ವಿದ್ಯೆಯೂ ಗುಪ್ತವಾಗಿದೆ. ಅನೇಕ ಸೇವಾಕೇಂದ್ರಗಳಿವೆ, ಚಿಕ್ಕ-ಪುಟ್ಟ ಹಳ್ಳಿಗಳಲ್ಲಿ ಸೇವಾಕೇಂದ್ರಗಳಿವೆ ಮತ್ತು ಅನೇಕ ಮಕ್ಕಳೂ ಇದ್ದಾರೆ. ಇನ್ನೂ ದಿನ – ಪ್ರತಿದಿನ ವೃದ್ಧಿಯಾಗುತ್ತಾ ಹೋಗುತ್ತದೆ. ಪುಸ್ತಕಗಳಲ್ಲಿಯೂ ಬರೆಯುತ್ತಾರೆ – ನಾವು ಈ ಭಾರತ ಭೂಮಿಯನ್ನು ಸ್ವರ್ಗವನ್ನಾಗಿ ಮಾಡಿ ತೀರುತ್ತೇವೆ. ನಿಮಗೆ ಈ ಭಾರತ ಭೂಮಿಯು ಬಹಳ ಪ್ರಿಯವಾಗಿದೆ ಏಕೆಂದರೆ ನೀವು ತಿಳಿದುಕೊಂಡಿದ್ದೀರಿ, ಈ ಭಾರತವೇ ಸ್ವರ್ಗವಾಗಿತ್ತು, ಇದಕ್ಕೆ 5000 ವರ್ಷಗಳಾಯಿತು. ಭಾರತವು ಬಹಳ ಗೌರವ ಪೂರ್ಣವಾಗಿತ್ತು, ನೀವು ಬ್ರಹ್ಮಾ ಮುಖವಂಶಾವಳಿಗೇ ಈ ಜ್ಞಾನವಿದೆ. ಈ ಭಾರತವನ್ನು ಶ್ರೀಮತದಂತೆ ಸ್ವರ್ಗವನ್ನಾಗಿ ಮಾಡಬೇಕಾಗಿದೆ, ಎಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ, ಮತ್ತ್ಯಾವುದೇ ಇಲ್ಲಿ ಕಿರಿಕಿರಿಯ ಮಾತಿಲ್ಲ. ಪರಸ್ಪರ ಕುಳಿತು ಸಲಹೆ ತೆಗೆದುಕೊಳ್ಳಬೇಕು – ಈ ಚಿತ್ರಗಳ ಮೂಲಕ ಇಂತಹ ಯಾವ ಜಾಹೀರಾತು ನೀಡಬೇಕು, ಯಾವುದರಿಂದ ಪತ್ರಿಕೆಗಳಲ್ಲಿಯೂ ಈ ಚಿತ್ರಗಳು ಬರಬೇಕಾಗಿದೆ. ಪರಸ್ಪರ ಇದರ ಬಗ್ಗೆ ಸೆಮಿನಾರ್ ಮಾಡಬೇಕಾಗಿದೆ. ಹೇಗೆ ಆ ಸರ್ಕಾರದವರು ಪರಸ್ಪರ ಸೇರುತ್ತಾರೆ, ಸಲಹೆ ತೆಗೆದುಕೊಳ್ಳುತ್ತಾರೆ – ಭಾರತವನ್ನು ನಾವು ಹೇಗೆ ಸುಧಾರಣೆ ಮಾಡುವುದು! ಈಗ ಇಷ್ಟೊಂದು ಮತ ಭೇದಗಳಾಗಿ ಬಿಟ್ಟಿದೆ, ಅವರನ್ನು ಪರಸ್ಪರ ಸೇರಿಸಿ ಒಂದು ಮಾಡಬೇಕು ಮತ್ತು ಭಾರತದಲ್ಲಿ ಸುಖ-ಶಾಂತಿಯು ಹೇಗೆ ಸ್ಥಾಪನೆಯಾಗುವುದು! ಹಾಗೆಯೇ ನೀವೂ ಸಹ ಆತ್ಮಿಕ ಪಾಂಡವ ಸರ್ಕಾರದವರಾಗಿದ್ದೀರಿ, ಇದು ದೊಡ್ಡ ಈಶ್ವರೀಯ ಸರ್ಕಾರವಾಗಿದೆ. ಪತಿತ-ಪಾವನ ತಂದೆಯೇ ಪತಿತ ಮಕ್ಕಳನ್ನು ಪಾವನರನ್ನಾಗಿ ಮಾಡಿ ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಾರೆ. ಈ ರಹಸ್ಯವನ್ನು ನೀವು ಮಕ್ಕಳು ಅರಿತುಕೊಂಡಿದ್ದೀರಿ. ಮುಖ್ಯವಾಗಿರುವುದು- ಭಾರತದ ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ, ಇದು ರುದ್ರ ಜ್ಞಾನ ಯಜ್ಞವಾಗಿದೆ. ಶಿವ ತಂದೆಗೆ ರುದ್ರನೆಂದು ಹೇಳಲಾಗುತ್ತದೆ, ಈಗ ತಂದೆಯು ಬಂದು ನಿಮ್ಮನ್ನು ಜಾಗೃತಗೊಳಿಸಿದ್ದಾರೆ. ಮತ್ತೆ ನೀವು ಅನ್ಯರನ್ನೂ ಜಾಗೃತಗೊಳಿಸಬೇಕಾಗಿದೆ, ಡ್ರಾಮಾ ಪ್ಲಾನನುಸಾರ ನೀವು ಜಾಗೃತರಾಗುತ್ತಾ ಇರುತ್ತೀರಿ. ಇಲ್ಲಿಯವರೆಗೆ ಯಾರ್ಯಾರು ಎಂತೆಂತಹ ಪುರುಷಾರ್ಥ ಮಾಡಿದ್ದಾರೆಯೋ ಕಲ್ಪದ ಮೊದಲೂ ಅಷ್ಟೇ ಮಾಡಿದ್ದರು, ನಿಮ್ಮದು ಆತ್ಮಿಕ ಯುದ್ಧವಾಗಿದೆ. ಕೆಲವೊಮ್ಮೆ ಮಾಯೆಯ ಪ್ರಭಾವವು ಹೆಚ್ಚಾಗುತ್ತದೆ, ಕೆಲವೊಮ್ಮೆ ಈಶ್ವರನದೂ ಹೆಚ್ಚಾಗುತ್ತದೆ. ಕೆಲಕೆಲವೊಮ್ಮೆ ಸೇವೆಯು ಬಹಳ ತೀವ್ರವಾಗಿ ನಡೆಯುತ್ತದೆ. ಕೆಲವೊಮ್ಮೆ ಕೆಲವು ಮಕ್ಕಳಲ್ಲಿ ಮಾಯೆಯ ವಿಘ್ನಗಳು ಬೀಳುತ್ತವೆ, ಮಾಯೆಯು ಒಮ್ಮೆಲೆ ಮೂರ್ಛಿತರನ್ನಾಗಿ ಮಾಡಿಬಿಡುತ್ತದೆ. ಯುದ್ಧದ ಮೈದಾನವಲ್ಲವೆ. ಮಾಯೆಯು ರಾಮನ ಸಂತಾನರನ್ನು ಮೂರ್ಛಿತಗೊಳಿಸುತ್ತದೆ. ಲವ-ಕುಶರ ಕಥೆಯೂ ಇದೆಯಲ್ಲವೆ. ರಾಮನಿಗೆ ಇಬ್ಬರು ಮಕ್ಕಳನ್ನು ತೋರಿಸುತ್ತಾರೆ, ಇಲ್ಲಂತೂ ತಂದೆಗೆ ಅನೇಕ ಮಕ್ಕಳಿದ್ದಾರೆ. ಈ ಸಮಯದಲ್ಲಿ ಎಲ್ಲಾ ಮನುಷ್ಯರು ಕುಂಭಕರ್ಣನ ನಿದ್ರೆಯಲ್ಲಿ ನಿದ್ರಿಸುತ್ತಿದ್ದಾರೆ, ಅವರಿಗೆ ಇದೂ ಸಹ ತಿಳಿದಿಲ್ಲ – ಪರಮಪಿತ ಪರಮಾತ್ಮನು ಮಕ್ಕಳಿಗೆ ಆಸ್ತಿಯನ್ನು ಕೊಡಲು ಬಂದಿದ್ದಾರೆ, ತಂದೆಯು ಭಾರತದಲ್ಲಿಯೇ ಬರುತ್ತಾರೆ. ಈ ಮಾತನ್ನು ಸಂಪೂರ್ಣ ಮರೆತು ಹೋಗಿದ್ದಾರೆ. ಭಾರತವಾಸಿಗಳೇ ಸ್ವರ್ಗದ ಮಾಲೀಕರಾಗಿದ್ದರು, ಇದರಲ್ಲಿ ಯಾವುದೇ ಸಂಶಯವಿಲ್ಲ. ಪರಮಪಿತ ಪರಮಾತ್ಮನ ಜನ್ಮವು ಇಲ್ಲಿಯೇ ಆಗುತ್ತದೆ. ಆದ್ದರಿಂದ ಭಾರತದಲ್ಲಿ ಶಿವ ಜಯಂತಿಯನ್ನು ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಅವರು ಬಂದು ಏನಾದರೂ ಮಾಡಿರಬೇಕು, ಬುದ್ಧಿಯೂ ಹೇಳುತ್ತದೆ – ಅವಶ್ಯವಾಗಿ ತಂದೆಯು ಬಂದು ಸ್ವರ್ಗದ ಸ್ಥಾಪನೆ ಮಾಡಿರುವರು. ಪ್ರೇರಣೆಯಿಂದ ಸ್ಥಾಪನೆ ಮಾಡಿರುವುದಿಲ್ಲ. ಇಲ್ಲಂತೂ ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸಲಾಗುತ್ತದೆ, ನೆನಪಿನ ಯಾತ್ರೆಯನ್ನು ಕಲಿಸಲಾಗುತ್ತದೆ, ಪ್ರೇರಣೆಯಿಂದ ಯಾವುದೇ ಶಬ್ಧವು ಕೇಳಿ ಬರುವುದಿಲ್ಲ. ಶಂಕರನು ಪ್ರೇರಣೆಯಿಂದ ವಿನಾಶ ಮಾಡುತ್ತಾನೆಂದು ತಿಳಿಯುತ್ತಾರೆ ಆದರೆ ಇದರಲ್ಲಿ ಪ್ರೇರಣೆಯ ಮಾತಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಡ್ರಾಮಾದಲ್ಲಿ ಅಣ್ವಸ್ತ್ರಗಳನ್ನು ತಯಾರಿಸುವುದೇ ಅವರ ಪಾತ್ರವಿದೆ. ಅವರು ವಿನಾಶಕ್ಕಾಗಿ ನಿಮಿತ್ತರಾಗಿದ್ದಾರೆ. ಪ್ರೇರಣೆಯು ಶಾಸ್ತ್ರಗಳ ಶಬ್ಧವಾಗಿದೆ, ಇದರಲ್ಲಿ ಪ್ರೇರಣೆಯ ಮಾತಿಲ್ಲ. ಶಂಕರನು ಸೂಕ್ಷ್ಮವತನದಲ್ಲಿರುತ್ತಾರೆ, ಡ್ರಾಮಾನುಸಾರ ವಿನಾಶವಾಗಲೇಬೇಕಾಗಿದೆ. ಮಹಾಭಾರತ ಯುದ್ಧದಲ್ಲಿ ಈ ಅಣ್ವಸ್ತ್ರಗಳೆಲ್ಲವನ್ನೂ ಉಪಯೋಗಿಸಿದ್ದರು ಎಂದು ಗಾಯನವಿದೆ. ಯಾವುದು ಕಳೆದು ಹೋಗಿದೆಯೋ ಅದು ಮತ್ತೆ ಪುನರಾವರ್ತನೆಯಾಗುವುದು. ನೀವು ಗ್ಯಾರಂಟಿ ಕೊಡುತ್ತೀರಿ – ನಾವು ಯೋಗಬಲದಿಂದ ಸ್ವರ್ಗದ ಸ್ಥಾಪನೆ ಮಾಡುತ್ತೇವೆ, ಅಲ್ಲಿ ಒಂದು ಧರ್ಮವಿರುವುದು. ಮತ್ತೆಲ್ಲಾ ಧರ್ಮಗಳು ಎಲ್ಲಿರುತ್ತವೆ? ಅವಶ್ಯವಾಗಿ ವಿನಾಶವಾಗಿ ಬಿಡುತ್ತವೆ. ಇದು ತಿಳಿದುಕೊಳ್ಳುವ ಮಾತಾಗಿವೆ. ಬ್ರಹ್ಮನ ಮೂಲಕ ಸ್ಥಾಪನೆ ಎಂದು ಗಾಯನವಿದೆ, ವಿಷ್ಣುವಿನ ಮೂಲಕ ಪಾಲನೆಯಂತೂ ಸರಿಯಾಗಿದೆ ಆದರೆ ಶಂಕರನನ್ನು ಶಿವನ ಜೊತೆ ಸೇರಿಸಿ ಬಿಟ್ಟಿದ್ದಾರೆ ಇದು ತಪ್ಪಾಗಿದೆ. ಶಿವ-ಶಂಕರನೆಂದು ಹೇಳಿ ಬಿಡುತ್ತಾರೆ ಏಕೆಂದರೆ ಶಂಕರನು ಯಾವುದೇ ಕಾರ್ಯವನ್ನು ಮಾಡುವುದಿಲ್ಲ ಆದ್ದರಿಂದ ಶಿವನೊಂದಿಗೆ ಸೇರಿಸಿ ಬಿಟ್ಟಿದ್ದಾರೆ ಆದರೆ ಶಿವ ತಂದೆಯು ತಿಳಿಸುತ್ತಾರೆ – ನಾನಂತೂ ಬಹಳ ಕೆಲಸವನ್ನು ಮಾಡಬೇಕಾಗುತ್ತದೆ, ಎಲ್ಲರನ್ನೂ ಪಾವನ ಮಾಡಬೇಕಾಗುತ್ತದೆ. ನಾನು ಈ ಬ್ರಹ್ಮಾರವರ ತನುವಿನಲ್ಲಿ ಪ್ರವೇಶ ಮಾಡಿ ಈ ಸಾಕಾರದ ಮೂಲಕ ಕಾರ್ಯ ಮಾಡಿಸುತ್ತೇನೆ. ಶಂಕರನ ಪಾತ್ರವೇನೂ ಇಲ್ಲ. ಶಿವನ ಪೂಜೆಯು ನಡೆಯುತ್ತದೆ, ಶಿವನೇ ಕಲ್ಯಾಣಕಾರಿ ಜೋಳಿಗೆಯನ್ನು ತುಂಬಿಸುವವರಾಗಿದ್ದಾರೆ. ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರಲ್ಲವೆ. ಈ ಬ್ರಹ್ಮನೂ ಸಹ ಪ್ರಜಾಪಿತನಾದರು. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ, ಇವು ಬಹಳ ಗುಹ್ಯ ಮಾತುಗಳಾಗಿವೆ. ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಬುದ್ಧಿವಂತ ಮಕ್ಕಳ ಬುದ್ಧಿಯಲ್ಲಿ ಜ್ಞಾನವು ಬಹು ಬೇಗನೆ ಅರ್ಥವಾಗುತ್ತದೆ. ಪತಿತ-ಪಾವನ ತಂದೆಯು ಯಾವಾಗ ಬರುತ್ತಾರೆಂದು ಮನುಷ್ಯರಿಗೇನೂ ತಿಳುವಳಿಕೆಯಿಲ್ಲ. ಈಗಂತೂ ಕಲಿಯುಗದ ಅಂತ್ಯವಾಗಿದೆ, ಒಂದುವೇಳೆ ಕಲಿಯುಗದ ಅಂತ್ಯಕ್ಕೆ ಇನ್ನೂ 40 ಸಾವಿರ ವರ್ಷಗಳಿದೆ ಎಂದು ಹೇಳುವುದಾದರೆ ಇನ್ನೆಷ್ಟು ಪತಿತರಾಗುವರು? ಎಷ್ಟು ದುಃಖವನ್ನು ಸಹನೆ ಮಾಡುವರು? ಕಲಿಯುಗದಲ್ಲಿ ಸುಖವಿರುವುದೇ ಇಲ್ಲ. ಏನನ್ನೂ ಅರಿತುಕೊಂಡಿರದ ಕಾರಣ ಘೋರ ಅಂಧಕಾರದಲ್ಲಿದ್ದಾರೆ. ನೀವು ಮಕ್ಕಳು ಪರಸ್ಪರ ಸೇರಿ ಹೇಗೆ ಸರ್ವೀಸನ್ನು ವೃದ್ಧಿ ಪಡಿಸಬೇಕೆಂದು ಸಲಹೆ ತೆಗೆದುಕೊಳ್ಳಬೇಕು. ತಂದೆಯು ಯುಕ್ತಿಯನ್ನಂತೂ ತಿಳಿಸುತ್ತಾ ಇರುತ್ತಾರೆ. ಮಕ್ಕಳು ಪರಸ್ಪರ ಸೇರಬೇಕಾಗಿದೆ. ಚಿತ್ರಗಳ ಬಗ್ಗೆ ಚೆನ್ನಾಗಿ ತಿಳಿಸಬೇಕಾಗಿದೆ. ಡ್ರಾಮಾನುಸಾರ ಚಿತ್ರಗಳೂ ತಯಾರಾಗುತ್ತಿವೆ. ಮಕ್ಕಳಿಗೆ ತಿಳಿದಿದೆ – ಯಾವ-ಯಾವ ಸಮಯವು ಕಳೆಯುತ್ತಾ ಹೋಗುತ್ತದೆಯೋ ಅದು ಹಾಗೆಯೇ ನಾಟಕವು ನಡೆಯುತ್ತಾ ಇರುತ್ತದೆ, ಮಕ್ಕಳ ಸ್ಥಿತಿಯು ಕೆಲವೊಮ್ಮೆ ಮೇಲೆ, ಕೆಲವೊಮ್ಮೆ ಕೆಳಗೆ, ಇದು ನಡೆಯುತ್ತಾ ಇರುವುದು. ತಂದೆಯೂ ಸಹ ಸಾಕ್ಷಿಯಾಗಿ ನೋಡುತ್ತಾರೆ, ಕೆಲಕೆಲವೊಮ್ಮೆ ಮಕ್ಕಳ ಮೇಲೆ ಗ್ರಹಚಾರಿ ಕುಳಿತುಕೊಳ್ಳುತ್ತದೆಯೆಂದರೆ ಅದನ್ನು ಅಳಿಸುವುದಕ್ಕಾಗಿ ಪ್ರಯತ್ನ ಪಡುತ್ತಾರೆ. ತಂದೆಯು ಪದೇ-ಪದೇ ತಿಳಿಸುತ್ತಾರೆ – ತಂದೆಯನ್ನು ನೆನಪು ಮಾಡಿರಿ. ಆದರೆ ದೇಹಾಭಿಮಾನದಲ್ಲಿ ಬರುವ ಕಾರಣ ಪೆಟ್ಟು ತಿನ್ನುತ್ತಾರೆ. ಇದರಲ್ಲಿ ದೇಹೀ-ಅಭಿಮಾನಿಯಾಗಬೇಕಾಗಿದೆ ಆದರೆ ಮಕ್ಕಳಲ್ಲಿ ಬಹಳ ದೇಹಾಭಿಮಾನವಿದೆ. ನೀವು ದೇಹೀ-ಅಭಿಮಾನಿಯಾಗಿರಿ ಆಗ ತಂದೆಯ ನೆನಪೂ ಇರುವುದು ಮತ್ತು ಸರ್ವೀಸಿನ ಉನ್ನತಿಯೂ ಆಗುತ್ತಿರುವುದು. ಯಾರು ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆಯೋ ಅವರು ಸದಾ ಸೇವೆಯಲ್ಲಿ ತೊಡಗಿರುತ್ತಾರೆ. ಒಂದುವೇಳೆ ಅದೃಷ್ಟದಲ್ಲಿಲ್ಲವೆಂದರೆ ಪುರುಷಾರ್ಥವನ್ನೂ ಮಾಡುವುದಿಲ್ಲ. ಬಾಬಾ, ನಮಗೆ ಧಾರಣೆಯಾಗುವುದಿಲ್ಲ, ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲವೆಂದು ತಾವೇ ಹೇಳುತ್ತಾರೆ. ಒಂದುವೇಳೆ ಧಾರಣೆಯಾಗುವುದಿಲ್ಲವೆಂದರೆ ಖುಷಿಯೂ ಇರುವುದಿಲ್ಲ. ಯಾರಿಗೆ ಧಾರಣೆಯಾಗುವುದೋ ಅವರಿಗೆ ಖುಷಿಯೂ ಇರುತ್ತದೆ, ಶಿವ ತಂದೆಯು ಬಂದಿದ್ದಾರೆಂಬುದನ್ನು ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನೀವು ಬಹಳ ಚೆನ್ನಾಗಿ ತಿಳಿದುಕೊಂಡು ಅನ್ಯರಿಗೂ ತಿಳಿಸಿರಿ. ಕೆಲವರಂತೂ ಸರ್ವೀಸಿನಲ್ಲಿ ತೊಡಗುತ್ತಾರೆ, ಪುರುಷಾರ್ಥ ಮಾಡುತ್ತಾ ಇರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಯಾವ-ಯಾವ ಕ್ಷಣವು ಕಳೆಯುತ್ತದೆಯೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ ಮತ್ತೆ ಹಾಗೆಯೇ ಪುನರಾವರ್ತನೆಯಾಗುತ್ತದೆ. ಮಕ್ಕಳಿಗೇ ತಿಳಿಸಲಾಗುತ್ತದೆ – ಹೊರಗಡೆ ಭಾಷಣ ಮಾಡುವ ಸಮಯದಲ್ಲಂತೂ ಅನೇಕ ಪ್ರಕಾರದ ಮನುಷ್ಯರು ಬರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಎಲ್ಲಾ ವೇದಶಾಸ್ತ್ರ, ಗೀತೆ ಮೊದಲಾದುದರ ಮೇಲೆ ಭಾಷಣ ಮಾಡುತ್ತಾರೆ ಆದರೆ ಅವರಿಗೆ ಇಲ್ಲಿ ಈಶ್ವರನು ತನ್ನ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆಂಬುದು ತಿಳಿದೇ ಇಲ್ಲ. ಚಿತ್ರಗಳಲ್ಲಿ ಪರಮಾತ್ಮನು ಯಾರೆಂಬುದನ್ನು ಎಷ್ಟು ಚೆನ್ನಾಗಿ ತೋರಿಸಿದ್ದಾರೆ! ಈ ಚಿತ್ರಗಳ ಬಗ್ಗೆ ಪ್ರೋಜೆಕ್ಟರ್ನಲ್ಲಿ ತಿಳಿಸಲು ಸಾಧ್ಯವಿಲ್ಲ. ಪ್ರದರ್ಶನಿಯಲ್ಲಿ ಚಿತ್ರಗಳೂ ಇವೆ ಮತ್ತು ನೀವು ತಿಳಿಸಿ ಕೇಳಬಹುದು – ಈಗ ಹೇಳಿರಿ – ಗೀತೆಯ ಭಗವಂತನು ಯಾರು? ಜ್ಞಾನ ಸಾಗರ ಯಾರು? ಪವಿತ್ರತೆ, ಸುಖ-ಶಾಂತಿಯ ಸಾಗರ, ಮುಕ್ತಿದಾತ, ಮಾರ್ಗದರ್ಶಕ ಯಾರು? ಕೃಷ್ಣನಿಗೆ ಈ ರೀತಿ ಹೇಳಲು ಸಾಧ್ಯವಿಲ್ಲ, ಪರಮಾತ್ಮನ ಮಹಿಮೆಯೇ ಬೇರೆಯಿದೆ. ಮೊದಲು ಬರೆಸಬೇಕು – ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು. ಎಲ್ಲರಿಂದ ಸಹಿಯನ್ನೂ ತೆಗೆದುಕೊಳ್ಳಬೇಕಾಗಿದೆ.

(ಹಾಲ್ನಲ್ಲಿ ಪಕ್ಷಿಗಳು ಹೊಡೆದಾಡುತ್ತಿವೆ) ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಜಗಳ-ಕಲಹವೇ ಇದೆ. ಎಲ್ಲರೂ ಪರಸ್ಪರ ಹೊಡೆದಾಡುತ್ತಾ ಇರುತ್ತಾರೆ. ಮನುಷ್ಯರಲ್ಲಿಯೇ ಪಂಚ ವಿಕಾರಗಳ ಗಾಯನವಿದೆ, ಪ್ರಾಣಿಗಳ ಮಾತಿಲ್ಲ. ಮನುಷ್ಯರಿಗಾಗಿಯೇ ವಿಕಾರಿ ಪ್ರಪಂಚ, ನಿರ್ವಿಕಾರಿ ಪ್ರಪಂಚದ ಗಾಯನವಿದೆ. ಕಲಿಯುಗದಲ್ಲಿ ಆಸುರೀ ಸಂಪ್ರದಾಯ, ಸತ್ಯಯುಗದಲ್ಲಿ ದೈವೀ ಸಂಪ್ರದಾಯವಿದೆ, ಮನುಷ್ಯರು ಇಷ್ಟು ತಮೋಪ್ರಧಾನ ಬುದ್ಧಿಯವರಾಗಿದ್ದಾರೆ, ನಾವು ಆಸುರೀ ಸಂಪ್ರದಾಯದವರಾಗಿದ್ದೇವೆ ಎಂದು ತಿಳಿದುಕೊಳ್ಳುವುದೇ ಇಲ್ಲ. ದೇವತೆಗಳ ಮುಂದೆ ಹೋಗಿ ನಾವು ನೀಚರು, ಪಾಪಿಗಳಾಗಿದ್ದೇವೆ. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹಾಡುತ್ತಾರೆ. ನೀವು ಅವರಿಗೆ ಸಿದ್ಧ ಮಾಡಿ ತಿಳಿಸಿರಿ. ಏಣಿಯ ಚಿತ್ರದಲ್ಲಿ ಬಹಳ ಸ್ಪಷ್ಟವಾಗಿದೆ. ಹೇಗೆ ಏರುವ ಕಲೆಯಾಗುತ್ತದೆ ಮತ್ತು ಇಳಿಯುವ ಕಲೆಯಾಗುತ್ತದೆ ಎಂಬುದನ್ನು ತೋರಿಸಿದ್ದಾರೆ. ಭಾರತವಾಸಿಗಳಿಗೆ ಮುಖ್ಯವಾದುದು ಏಣಿಯ ಚಿತ್ರವಾಗಿದೆ. ಇದು ಎಲ್ಲದಕ್ಕಿಂತ ಒಳ್ಳೆಯ ಚಿತ್ರವಾಗಿದೆ, ಈ ಚಿತ್ರದ ಬಗ್ಗೆ ನೀವು ಬಹಳ ಚೆನ್ನಾಗಿ ತಿಳಿಸಬಲ್ಲಿರಿ. 84 ಜನ್ಮಗಳನ್ನು ಪೂರ್ಣಗೊಳಿಸಿ ಮತ್ತೆ ಮೊದಲ ನಂಬರಿನ ಜನ್ಮವನ್ನು ತೆಗೆದುಕೊಳ್ಳಬೇಕಾಗಿದೆ, ಮತ್ತೆ ಇಳಿಯುವ ಕಲೆಯಲ್ಲಿ ಬರಬೇಕಾಗುತ್ತದೆ. ಎಲ್ಲರಿಗೆ ಹೇಗೆ ಮಾರ್ಗವನ್ನು ತಿಳಿಸಬೇಕೆಂದು ಪ್ರತಿಯೊಬ್ಬರಿಗೆ ವಿಚಾರ ನಡೆಯಬೇಕು. ವಿಚಾರ ನಡೆಯದಿದ್ದರೆ ಸರ್ವೀಸ್ ಹೇಗೆ ಮಾಡುವಿರಿ? ಚಿತ್ರಗಳ ಬಗ್ಗೆ ತಿಳಿಸುವುದು ಬಹಳ ಸಹಜವಾಗುತ್ತದೆ. ಸತ್ಯಯುಗದ ನಂತರ ಏಣಿಯನ್ನು ಇಳಿಯಲೇಬೇಕಾಗಿದೆ. ಮಕ್ಕಳಿಗೆ ತಿಳಿದಿದೆ – ನಾವೀಗ ವರ್ಗಾವಣೆಯಾಗುತ್ತಿದ್ದೇವೆ ಆದರೆ ನೇರವಾಗಿ ಸತ್ಯಯುಗಕ್ಕೆ ಹೋಗುವುದಿಲ್ಲ. ಮೊದಲು ಶಾಂತಿಧಾಮದಲ್ಲಿ ಹೋಗಬೇಕಾಗಿದೆ. ನಾವು ಪಾತ್ರಧಾರಿಗಳಾಗಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ ಬಾಕಿ ನಿಮ್ಮಲ್ಲಿಯೂ ಈ ಡ್ರಾಮಾದ ಪಾತ್ರಧಾರಿಗಳೆಂದು ತಿಳಿದುಕೊಳ್ಳುವವರು ನಂಬರ್ವಾರ್ ಇದ್ದಾರೆ. ನಾವು ಪಾತ್ರಧಾರಿಗಳೆಂದು ಹೇಳುವವರು ಪ್ರಪಂಚದಲ್ಲಿ ಮತ್ತ್ಯಾರೂ ಇಲ್ಲ. ನಾವು ಬರೆಯುತ್ತೇವೆ – ಪ್ರತಿಯೊಬ್ಬ ಮನುಷ್ಯ ಮಾತ್ರನೂ ಈ ಬೇಹದ್ದಿನ ಡ್ರಾಮಾದ ಪಾತ್ರಧಾರಿಯಾಗಿದ್ದರೂ ಸಹ ಡ್ರಾಮಾದ ಮುಖ್ಯ ಪಾತ್ರಧಾರಿಗಳು, ನಿರ್ದೇಶಕ, ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ ಆದ್ದರಿಂದ ಅವರು ಬುದ್ಧಿಹೀನರಾಗಿದ್ದಾರೆ. ಇದನ್ನು ಬರೆಯುವುದರಲ್ಲಿ ಏನೂ ಪರವಾಗಿಲ್ಲ. ಒಂದು ಕಿವಿಯಿಂದ ಕೇಳಿ ಇನ್ನೊಂದರಿಂದ ತೆಗೆದುಬಿಡಬಾರದು. ಸರ್ವೀಸ್, ಸರ್ವೀಸ್ ಮತ್ತು ಸರ್ವೀಸ್….. ತಂದೆಗೆ ತಿಳಿದಿದೆ – ಮಕ್ಕಳ ಮೇಲೆ ಕೆಲವೊಮ್ಮೆ ಗ್ರಹಚಾರವು ಕುಳಿತುಕೊಳ್ಳುತ್ತದೆ, ಗ್ರಹಚಾರವು ಕುಳಿತುಕೊಂಡಾಗ ಎಷ್ಟೊಂದು ನಷ್ಟವುಂಟಾಗುತ್ತದೆ. ಅದನ್ನು ತಂದೆಯು ತಿಳಿದುಕೊಂಡಿದ್ದಾರೆ. ಸಾಹುಕಾರರು ಬಡವರಾಗಿ ಬಿಡುತ್ತಾರೆ. ಕಾರಣವಂತೂ ಇರುತ್ತದೆಯಲ್ಲವೆ. ಅನೇಕರಿಗೆ ತಂದೆಯು ತಿಳಿಸುತ್ತಲೂ ಇರುತ್ತಾರೆ – ಮಕ್ಕಳೇ, ನಾಮ-ರೂಪದಲ್ಲಿ ಎಂದೂ ಸಿಲುಕಬೇಡಿ. ಇಲ್ಲವಾದರೆ ಮಾಯೆಯು ಹೀಗಿದೆ, ಅದು ಮೂಗನ್ನಿಡಿದು ಬೀಳಿಸುತ್ತದೆ. ಮಾಯೆಯು ಬಹಳ ಮೋಸ ಮಾಡುತ್ತದೆ, ಇಲ್ಲಿ ಪ್ರಿಯತಮ-ಪ್ರಿಯತಮೆಯರಾಗಬಾರದು. ಯಾವುದೇ ವಿಕಾರಕ್ಕಾಗಿ ಅವರು ಪ್ರಿಯತಮ-ಪ್ರಿಯತಮೆಯರಾಗುವುದಿಲ್ಲ. ಕೆಲವರು ರೂಪಕ್ಕಾಗಿ ಬಲಿಹಾರಿಯಾಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ಸೇವಾಕೇಂದ್ರಗಳಲ್ಲಿಯೂ ಇಂತಹ ಮಾಯೆಯ ವಿಘ್ನಗಳು ಬರುತ್ತವೆ, ಒಬ್ಬರು ಇನ್ನೊಬ್ಬರ ನಾಮ-ರೂಪದಲ್ಲಿ ಸಿಲುಕುತ್ತಾರೆ. ಮಾಯೆಯು ಇಷ್ಟು ಪ್ರಬಲವಾಗಿದೆ, ಮಾತೆಯು ಮಾತೆಯ ನಾಮ-ರೂಪದಲ್ಲಿ, ಕನ್ಯೆಯು ಕನ್ಯೆಯ ನಾಮ-ರೂಪದಲ್ಲಿ ಸಿಲುಕುತ್ತಾರೆ. ಪುರುಷಾರ್ಥ ಮಾಡುತ್ತಿದ್ದರೂ ಮಾಯೆಯು ಹಿಡಿದುಕೊಂಡು ಬಿಡುತ್ತದೆ ಆದ್ದರಿಂದ ತಂದೆಯು ಸಾವಧಾನ ನೀಡುತ್ತಾರೆ – ಮಕ್ಕಳೇ, ಮಾಯೆಯು ಬಹಳ ಸಿಕ್ಕಿ ಹಾಕಿಸುವ ಪ್ರಯತ್ನ ಮಾಡುವುದು ಆದರೆ ನೀವು ಸಿಲುಕಬಾರದು. ದೇಹಾಭಿಮಾನದಲ್ಲಿ ಬರಬಾರದು, ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ, ಮಾಯೆಯ ಮೋಸದಿಂದ ದೂರವಿರಬೇಕಾಗಿದೆ. ನೀವು ಮಕ್ಕಳನ್ನು ತಂದೆಯು ಸುಂದರ ಹೂಗಳನ್ನಾಗಿ ಮಾಡಲು ಬಂದಿದ್ದಾರೆ. ನಿಮಗೆ ಯಾವುದೇ ಮಾತಿನಲ್ಲಿ ಸಂಶಯ ಬರಬಾರದು. ಒಂದುವೇಳೆ ಮನಸ್ಸಿನಲ್ಲಿ ಸಂಶಯ ಬಂದರೆ ಚೆನ್ನಾಗಿ ಸರ್ವೀಸ್ ಮಾಡಲು ಸಾಧ್ಯವಿಲ್ಲ. ಒಳಗೆ ಗುಟುಕರಿಸುತ್ತಾ ಇರುತ್ತಾರೆ, ಇದರಲ್ಲಿ ಧೈರ್ಯವನ್ನು ಇಡಬೇಕಾಗಿದೆ. ಸಮಯವು ಬಹಳ ಕಡಿಮೆಯಿದೆ, ತಂದೆಯ ಮುರುಳಿಯನ್ನು ಕೇಳುತ್ತೀರೆಂದರೆ ಉತ್ಸಾಹದಲ್ಲಿ ಬರುತ್ತೀರಿ, ಆತ್ಮ ಪ್ರಕಾಶ ಮಗುವು ಬಹಳ ಚೆನ್ನಾಗಿ ಚಿತ್ರಗಳ ಕಡೆ ಗಮನ ಕೊಡುತ್ತಿದ್ದಾರೆ. ಬಾಂಬೆಯವರಿಗೂ ಬುದ್ಧಿಯಲ್ಲಿ ಬರಬೇಕಾಗಿದೆ. ಮುಖ್ಯ ಚಿತ್ರಗಳನ್ನು ಮೊದಲು ಇವರು ಮಾಡಬೇಕಾಗಿದೆ. ಪರಿಶೀಲನೆ ಮಾಡಿಕೊಳ್ಳಿ, ಹೇಗೆ ಚಿತ್ರಗಳಲ್ಲಿ ಉನ್ನತಿಯಾಗಬೇಕು ಎಂದು ತಂದೆಯು ಡೈರೆಕ್ಷನ್ ಕೊಡುತ್ತಾ ಇರುತ್ತಾರೆ. ಯಾವುದಾದರೂ ಇಂತಹ ಯುಕ್ತಿಯನ್ನು ರಚಿಸಿರಿ. ಏಣಿಚಿತ್ರವು ವಿಮಾನ ನಿಲ್ದಾಣದಲ್ಲಿ ಹಾಕುವಂತಿರಬೇಕು, ಈ ಚಿತ್ರವನ್ನು ನೋಡಿ ಎಲ್ಲರೂ ಖುಷಿ ಪಡುವರು. ಕೊನೆಗೆ ತಿಳಿದುಕೊಳ್ಳುತ್ತಾರೆ – ಇವರಿಗೆ ಮತ ಕೊಡುವವರು ಯಾರು? ಅಂದಾಗ ಮಕ್ಕಳಿಗೆ ಬಹಳ ನಶೆಯೇರಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಎಲ್ಲಾ ಸೇವಾಕೇಂದ್ರದ ಮಕ್ಕಳು ಗೀತೆಯನ್ನು ಕೇಳಿದಿರಿ, ನೀವು ಇಂದು ಕೇಳುತ್ತಿದ್ದೀರಿ, ದೂರದಲ್ಲಿರುವ ಮಕ್ಕಳು 2-4 ದಿನಗಳ ನಂತರ ಕೇಳುತ್ತಾರೆ. ಒಂದುವೇಳೆ ಹಳೆಯ ಪ್ರಪಂಚ, ಹಳೆಯ ಶರೀರದೊಂದಿಗೆ ಮನಸ್ಸನ್ನಿಟ್ಟಿದ್ದೇ ಆದರೆ ಅದೃಷ್ಟವು ಕೆಟ್ಟುಹೋಗುವುದು ಏಕೆಂದರೆ ಈ ಶರೀರವು ಹಳೆಯ ಪ್ರಪಂಚದ್ದಾಗಿದೆ ಆದ್ದರಿಂದ ಒಂದುವೇಳೆ ದೇಹಾಭಿಮಾನಿಗಳಾದರೆ ಇಷ್ಟೊಂದು ಯಾವ ಅದೃಷ್ಟವು ರೂಪಿಸಲ್ಪಡುತ್ತಿದೆಯೋ ಅದೂ ಸಹ ಕೆಟ್ಟು ಹೋಗುವುದು. ನೀವೀಗ ದುರಾದೃಷ್ಟರಿಂದ ಅದೃಷ್ಟವಂತರಾಗುತ್ತಿದ್ದೀರಿ ಆದ್ದರಿಂದ ಎಷ್ಟು ಸಾಧ್ಯವೋ ಒಬ್ಬ ತಂದೆಯನ್ನು ನೆನಪು ಮಾಡಿ, ಯಾರು ಬೇಹದ್ದಿನ ಆಸ್ತಿಯನ್ನು ಕೊಡುತ್ತಿದ್ದಾರೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ಈ ಹಳೆಯ ಪ್ರಪಂಚದಲ್ಲಿ ಇನ್ನು ಸ್ವಲ್ಪವೇ ಸಮಯವಿದೆ, ಇದರಲ್ಲಿ ನೀವು ಪುರುಷಾರ್ಥ ಮಾಡಿ. ಅವಶ್ಯವಾಗಿ ಸರ್ವಗುಣ ಸಂಪನ್ನ ಆಗಬೇಕಾಗಿದೆ. ಅನೇಕರು ಪವಿತ್ರರಾಗಿಯೂ ಇದ್ದಾರೆ, ಕೆಲವರು ಪದೇ-ಪದೇ ಕೆಳಗೆ ಬೀಳುತ್ತಾರೆ. ತಂದೆಯು ತಿಳಿಸುತ್ತಾರೆ – ನೀವು ಅವಶ್ಯವಾಗಿ ಸರ್ವಗುಣ ಸಂಪನ್ನರಾಗಬೇಕಾಗಿದೆ. ತಂದೆಯ ಜೊತೆ ಸೇವೆಯಲ್ಲಿಯೂ ಜೊತೆಗಾರರಾಗಬೇಕು. ಬಹಳ ದೊಡ್ಡ ಸೇವೆಯಾಗಿದೆ. ಇಡೀ ಪತಿತ ಪ್ರಪಂಚವನ್ನು ಪಾವನ ಮಾಡಲು ಎಲ್ಲರೂ ತಂದೆಗೆ ಸಹಯೋಗ ನೀಡುತ್ತಾರೆಂದಲ್ಲ. ಯಾರು ಕಲ್ಪದ ಹಿಂದೆ ಸಹಯೋಗ ನೀಡಿದ್ದಾರೆಯೋ ಬ್ರಾಹ್ಮಣ ಕುಲಭೂಷಣ ಬಿ.ಕೆ. ಆಗಿದ್ದಾರೆಯೋ ಅವರು ಬುದ್ಧಿವಂತರಾಗುತ್ತಾರೆ. ಪ್ರಜಾಪಿತ ಬ್ರಹ್ಮನ ಹೆಸರಂತೂ ಗಾಯನವಿದೆ, ಬ್ರಹ್ಮಾನ ಮಕ್ಕಳಿಗೆ ಅವಶ್ಯವಾಗಿ ಬ್ರಹ್ಮಾಕುಮಾರ-ಕುಮಾರಿಯರೆಂದೇ ಹೇಳಲಾಗುತ್ತದೆ. ಅವಶ್ಯವಾಗಿ ಇದ್ದು ಹೋಗಿದ್ದಾರೆ, ಆದಿ ದೇವ-ಆದಿ ದೇವಿಯನ್ನೂ ನೆನಪು ಮಾಡುತ್ತಾರೆ ಏಕೆಂದರೆ ಯಾವುದು ಮೊದಲು ಆಗಿ ಹೋಗಿದೆಯೋ ಅದು ಪುನಃ ಆಗುವುದು. ಇದನ್ನು ನೀವು ತಿಳಿದುಕೊಂಡಿದ್ದೀರಿ, ಸತ್ಯಯುಗವು ಬಂದು ಹೋಗಿದೆ. ಆದಿ ಸನಾತನ ದೇವಿ-ದೇವತೆಗಳ ರಾಜ್ಯವಿತ್ತು, ಅದು ಈಗ ಇಲ್ಲ. ದೇವಿ-ದೇವತೆಗಳು ಯಾರು ಪವಿತ್ರ ಪ್ರವೃತ್ತಿ ಮಾರ್ಗದವರು ರಾಜ್ಯ ಮಾಡುತ್ತಿದ್ದರೋ ಅವರು ಈಗ 84ನೇ ಜನ್ಮದ ಅಂತಿಮದಲ್ಲಿದ್ದಾರೆ. ಈಗ ಪವಿತ್ರರಿಲ್ಲ ಮತ್ತು ಆ ರಾಜ್ಯವೂ ಇಲ್ಲ. ಎಲ್ಲರೂ ಪತಿತರಾಗಿ ಬಿಟ್ಟಿದ್ದಾರೆ, ಪುನಃ ಪಾವನರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ-ಮಕ್ಕಳೇ, ಪತಿತರೊಂದಿಗೆ ಬುದ್ಧಿಯೋಗವನ್ನು ಇಡಬೇಡಿ, ಒಬ್ಬ ತಂದೆಯನ್ನು ನೆನಪು ಮಾಡಿ.

ನೀವು ತಿಳಿದುಕೊಂಡಿದ್ದೀರಿ – ನಾವು ತಂದೆಯ ಸಲಹೆಯಂತೆ ನಡೆದು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಆಸ್ತಿಯನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಯುಕ್ತಿಯನ್ನೂ ತಿಳಿಸುತ್ತಾರೆ. ಮನುಷ್ಯರಂತೂ ಅನೇಕ ಪ್ರಕಾರದ ಯುಕ್ತಿಗಳನ್ನು ರಚಿಸುತ್ತಾರೆ. ಕೆಲವರು ವಿಜ್ಞಾನದ ಅಭಿಮಾನಿಗಳಾಗಿದ್ದಾರೆ, ಕೆಲವರು ವೈದ್ಯಕೀಯ ಅಭಿಮಾನಿಗಳಾಗಿದ್ದಾರೆ. ಮನುಷ್ಯರ ಹೃದಯವು ಹಾಳಾದರೆ ಇನ್ನೊಂದು ಪ್ಲಾಸ್ಟಿಕ್ ಹೃದಯವನ್ನು ಹಾಕಬಲ್ಲೆವು ಎಂದು ಬರೆಯುತ್ತಾರೆ. ನಿಜವಾದುದನ್ನು ತೆಗೆದು ತಾತ್ಕಾಲಿಕ ಹೃದಯವನ್ನು ನಡೆಸುತ್ತಿರುತ್ತಾರೆ. ಇದೂ ಸಹ ಎಷ್ಟು ಒಳ್ಳೆಯ ಕಲೆಯಾಗಿದೆ ಆದರೆ ಇದು ಅಲ್ಪಕಾಲದ ಸುಖಕ್ಕಾಗಿ. ನಾಳೆ ಅವರು ಮರಣ ಹೊಂದಿದರೆ ಶರೀರವೇ ಸಮಾಪ್ತಿ ಆಗಿ ಬಿಡುವುದು, ಪ್ರಾಪ್ತಿಯೇನೂ ಆಗುವುದಿಲ್ಲ. ಅಲ್ಪಕಾಲಕ್ಕಾಗಿ ಸಿಕ್ಕಿತಷ್ಟೇ. ವಿಜ್ಞಾನದ ಮೂಲಕ ಬಹಳಷ್ಟು ಕಮಾಲ್ ಮಾಡಿ ತೋರಿಸುತ್ತಾರೆ ಅದೂ ಕೇವಲ ಅಲ್ಪಕಾಲಕ್ಕಾಗಿ. ಈ ಮಾತಂತೂ ಎಲ್ಲದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಪಾವನ ಆತ್ಮವು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತವಾಗಿ ಬಿಟ್ಟಿದೆ. ಆ ಪತಿತ ಆತ್ಮವನ್ನು ಪುನಃ ಪಾವನವನ್ನಾಗಿ ತಂದೆಯ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಒಬ್ಬ ತಂದೆಯದೇ ಗಾಯನವಿದೆ, ಸರ್ವರ ಪತಿತ-ಪಾವನ, ಸರ್ವರ ಸದ್ಗತಿದಾತ, ಸರ್ವರ ಮೇಲೆ ದಯಾ ದೃಷ್ಟಿಯನ್ನು ಇಡುವವರು, ಸರ್ವೋದಯ ಲೀಡರ್ ಆಗಿದ್ದಾರೆ. ಮನುಷ್ಯರು ತಮ್ಮನ್ನು ಸರ್ವೋದಯ ಲೀಡರ್ ಎಂದು ಕರೆಸಿಕೊಳ್ಳುತ್ತಾರೆ ಆದರೆ ಸರ್ವ ಎಂದರೆ ಅದರಲ್ಲಿ ಎಲ್ಲರೂ ಬಂದುಬಿಡುತ್ತಾರೆ. ಅಂದಮೇಲೆ ಸರ್ವರ ಮೇಲೆ ದಯೆ ತೋರಿಸುವವರು ತಂದೆಯೊಬ್ಬರೇ ಎಂದು ಗಾಯನವಿದೆ. ಅವರಿಗೇ ದಯಾ ಸಾಗರ, ಆನಂದ ಸಾಗರನೆಂದು ಹೇಳುತ್ತಾರೆ. ಉಳಿದ ಮನುಷ್ಯರು ಸರ್ವರ ಮೇಲೆ ದಯೆ ತೋರಿಸಲು ಸಾಧ್ಯವೇ? ತಮ್ಮಮೇಲೆ ದಯೆ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದರೆ ಅನ್ಯರ ಮೇಲೆ ಏನು ಮಾಡುವರು? ಇವರು ಅಲ್ಪಕಾಲದ ದಯೆ ತೋರಿಸುತ್ತಾರೆ. ಎಷ್ಟು ದೊಡ್ಡ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ.

ಈಗ ತಂದೆಯು ತಿಳಿಸುತ್ತಾರೆ – ನಿಮಗೆ ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುವ ಎಷ್ಟು ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ಯುಕ್ತಿಯು ಅತಿ ಸಹಜವಾಗಿದೆ, ಕೇವಲ ನನ್ನನ್ನು ನೆನಪು ಮಾಡಿರಿ ಏಕೆಂದರೆ ನೀವು ನನ್ನನ್ನೇ ಮರೆತು ಹೋದಿರಿ. ಸತ್ಯಯುಗದಲ್ಲಿ ನೀವು ಸುಖಿಯಾಗಿರುತ್ತೀರಿ ಆದ್ದರಿಂದ ನನ್ನನ್ನು ನೆನಪು ಮಾಡುವುದಿಲ್ಲ. ನಿಮ್ಮ 84 ಜನ್ಮಗಳ ಚರಿತ್ರೆ-ಭೂಗೋಳವನ್ನು ನಿಮಗೆ ತಿಳಿಸುತ್ತೇನೆ, ನೀವು ಹೀಗೆ ರಾಜ್ಯ ಮಾಡುತ್ತಿದ್ದಿರಿ, ಸದಾ ಸುಖಿಯಾಗಿದ್ದಿರಿ, ನಂತರ ದಿನ-ಪ್ರತಿದಿನ ಕೆಳಗಿಳಿಯುತ್ತಾ-ಇಳಿಯುತ್ತಾ ತಮೋಪ್ರಧಾನ, ದುಃಖಿ, ಪತಿತರಾಗಿ ಬಿಟ್ಟಿದ್ದೀರಿ. ಈಗ ತಂದೆಯು ಪುನಃ ನೀವುಮಕ್ಕಳಿಗೆ ಕಲ್ಪದ ಮೊದಲಿನಂತೆ ಆಸ್ತಿಯನ್ನು ಕೊಡುತ್ತಿದ್ದಾರೆ. ನೀವೇ ಕಲ್ಪ-ಕಲ್ಪವೂ ಬಂದು ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ, ಶ್ರೀಮತದಂತೆ ನಡೆಯುತ್ತೀರಿ. ಶ್ರೀಮತವು ಬಾಪ್ದಾದಾರವರ ಮತವಾಗಿದೆ. ಅವರನ್ನು ಬಿಟ್ಟರೆ ಶ್ರೀಮತವೆಲ್ಲಿಂದ ಸಿಗುವುದು! ತಂದೆಯು ತಿಳಿಸುತ್ತಾರೆ – ನೀವು ವಿಚಾರ ಮಾಡಿ, ಈ ಕಲೆಯು ಯಾರಲ್ಲಿಯಾದರೂ ಇದೆಯೇ? ಇಲ್ಲ. ವಿಶ್ವದ ಮಾಲೀಕರನ್ನಾಗಿ ಮಾಡುವ ಯುಕ್ತಿಯನ್ನು ತಂದೆಯೇ ತಿಳಿಸಿಕೊಡುತ್ತಾರೆ. ಇದರ ವಿನಃ ಮತ್ತ್ಯಾವುದೇ ಉಪಾಯವಿಲ್ಲ. ಪತಿತ-ಪಾವನ ತಂದೆಯೇ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಜ್ಞಾನ ತಿಳಿಸುತ್ತಾರೆ. ಕೇವಲ ಸೃಷ್ಟಿಚಕ್ರದ ಜ್ಞಾನವನ್ನು ತಿಳಿದುಕೊಳ್ಳುವುದರಿಂದ ನೀವು ಪವಿತ್ರರಾಗಿ ಬಿಡುವುದಿಲ್ಲ. ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿರಿ, ಈ ಯೋಗಾಗ್ನಿಯಿಂದಲೇ ನಿಮ್ಮ ಪಾಪದ ಕೊಡವು ಸಮಾಪ್ತಿ ಆಗುವುದು.

ನೀವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಬಹಳ ಪತಿತರಾಗಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ಇತ್ತೀಚೆಗಂತೂ ಮನುಷ್ಯರು ನಾನೇ ಶಿವನೆಂದು ಹೇಳಿಕೊಳ್ಳುತ್ತಾರೆ ಅಥವಾ ನೀವು ಪರಮಾತ್ಮನ ರೂಪವಾಗಿದ್ದೀರಿ, ಆತ್ಮನೇ ಪರಮಾತ್ಮನೆಂದು ಹೇಳುತ್ತಾರೆ. ಈಗ ತಂದೆಯು ಬಂದಿದ್ದಾರೆ, ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯೇ ನೆನಪು ತರಿಸಬೇಕಾಗಿದೆ. ಸರ್ವರ ಸದ್ಗತಿದಾತನು ಒಬ್ಬ ಪರಮಪಿತ ಪರಮಾತ್ಮನೇ ಆಗಿದ್ದಾರೆ. ಶಿವನ ಮಂದಿರಗಳನ್ನು ಪ್ರತ್ಯೇಕವಾಗಿ ಕಟ್ಟಿಸುತ್ತಾರೆ, ಶಂಕರನ ರೂಪವೇ ಬೇರೆಯಾಗಿದೆ. ಪ್ರದರ್ಶನಿಯಲ್ಲಿಯೂ ಇದನ್ನು ತೋರಿಸಬೇಕಾಗಿದೆ, ಶಿವ ನಿರಾಕಾರ, ಶಂಕರ ಆಕಾರಿಯಾಗಿದ್ದಾನೆ. ಕೃಷ್ಣನಂತೂ ಸಾಕಾರದಲ್ಲಿದ್ದಾನೆ, ಜೊತೆಯಲ್ಲಿ ರಾಧೆಯನ್ನು ತೋರಿಸುವುದು ಸರಿಯಾಗಿದೆ. ಆಗ ಇದು ಸಿದ್ಧವಾಗುವುದು – ಇವರೇ ನಂತರ ಲಕ್ಷ್ಮೀ-ನಾರಾಯಣ ಆಗುತ್ತಾರೆಂದು. ಕೃಷ್ಣನು ದ್ವಾಪರದಲ್ಲಿ ಗೀತೆಯನ್ನು ತಿಳಿಸಲು ಬರುವುದೇ ಇಲ್ಲ. ಪತಿತರಾಗುವುದು ಕಲಿಯುಗದ ಅಂತ್ಯದಲ್ಲಿ, ಸತ್ಯಯುಗದಲ್ಲಿ ಪಾವನರಿರುತ್ತಾರೆ ಅಂದಮೇಲೆ ತಂದೆಯು ಸಂಗಮದಲ್ಲಿಯೇ ಬರುತ್ತಾರೆ. ಇದನ್ನು ತಂದೆಯೇ ತಿಳಿದುಕೊಂಡಿದ್ದಾರೆ, ಅವರೇ ತ್ರಿಕಾಲದರ್ಶಿಯಾಗಿದ್ದಾರೆ. ಕೃಷ್ಣನಿಗೆ ತ್ರಿಕಾಲದರ್ಶಿಯೆಂದು ಹೇಳಲಾಗುವುದಿಲ್ಲ, ಅವರು ಮೂರು ಕಾಲಗಳ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ ಏಕೆಂದರೆ ಕೃಷ್ಣನಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವೇ ಇಲ್ಲ. ಕೃಷ್ಣನು ಚಿಕ್ಕ ಮಗುವಾಗಿದ್ದಾನೆಂದು ಹೇಳುತ್ತಾರೆ. ದೈವೀ ರಾಜಕುಮಾರ-ಕುಮಾರಿಯರು ಕಾಲೇಜಿಗೆ ಓದಲು ಹೋಗುತ್ತಾರೆ. ಮೊದಲು ಇಲ್ಲಿಯೂ ಸಹ ರಾಜಕುಮಾರ-ಕುಮಾರಿಯರ ಕಾಲೇಜುಗಳಿತ್ತು, ಈಗ ಒಂದೇ ಬೆರಕೆಯಾಗಿ ಬಿಟ್ಟಿದೆ. ಕೃಷ್ಣನು ರಾಜಕುಮಾರನಾಗಿದ್ದನು, ಅನ್ಯ ರಾಜಕುಮಾರ-ಕುಮಾರಿಯರೂ ಇರುತ್ತಾರೆ, ಎಲ್ಲರೂ ಒಟ್ಟಿಗೆ ಓದುತ್ತಾರೆ. ಅದಂತೂ ನಿರ್ವಿಕಾರಿ ಪ್ರಪಂಚವಾಗಿದೆ, ಒಬ್ಬ ಶಿವ ತಂದೆಯು ಸರ್ವರ ಸದ್ಗತಿದಾತನಾಗಿದ್ದಾರೆ. ಮನುಷ್ಯರು ಸರ್ವರ ಸದ್ಗತಿದಾತನಾಗಲು ಸಾಧ್ಯವಿಲ್ಲ. ತಂದೆಯೇ ಬಂದು ಸರ್ವರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ದೇವತೆಗಳ ರಾಜ್ಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ಧರ್ಮಗಳು ಅರ್ಧದಿಂದ ಬರುತ್ತವೆ ಅಂದಮೇಲೆ ಸತ್ಯಯುಗದಲ್ಲಿ ಈ ಧರ್ಮಗಳಿರಲು ಹೇಗೆ ಸಾಧ್ಯ! ಇವರು ನಿವೃತ್ತಿ ಮಾರ್ಗದವರು ಹಠಯೋಗಿಗಳಾಗಿದ್ದಾರೆ. ರಾಜಯೋಗವನ್ನು ತಿಳಿದುಕೊಂಡಿಲ್ಲ. ಪ್ರವೃತ್ತಿ ಮಾರ್ಗದವರಿಗಾಗಿ ಈ ರಾಜಯೋಗವಿದೆ, ಭಾರತವು ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಈಗ ಕಲಿಯುಗದಲ್ಲಿ ಪತಿತ ಪ್ರವೃತ್ತಿ ಮಾರ್ಗದವರಾಗಿ ಬಿಟ್ಟಿದ್ದೀರಿ. ಭಗವಾನುವಾಚ, ನನ್ನೊಬ್ಬನನ್ನೇ ನೆನಪು ಮಾಡಿರಿ. ಹಳೆಯ ಪ್ರಪಂಚ ಅಥವಾ ದೇಹದ ಸಂಬಂಧಗಳೊಂದಿಗೆ ಮನಸ್ಸನ್ನಿಟ್ಟರೆ ಅದೃಷ್ಟವು ಕೆಟ್ಟು ಹೋಗುವುದು. ಅನೇಕರ ಅದೃಷ್ಟವು ಕೆಟ್ಟು ಹೋಗುತ್ತದೆ. ಯಾರಾದರೂ ಅಕರ್ತವ್ಯ ಮಾಡಿದ್ದರೆ ಅಂತಿಮದಲ್ಲಿ ಅದೆಲ್ಲವೂ ಮುಂದೆ ಬರುತ್ತದೆ, ಸಾಕ್ಷಾತ್ಕಾರವಾಗುತ್ತದೆ. ಕೆಲವು ಮಕ್ಕಳು ಬಹಳ ಮುಚ್ಚಿಡುತ್ತಾರೆ. ಈ ಜನ್ಮದಲ್ಲಿ ಮಾಡಿರುವ ಪಾಪಕರ್ಮಗಳನ್ನು ತಂದೆಗೆ ತಿಳಿಸುವುದರಿಂದ ಅರ್ಧ ಶಿಕ್ಷೆಯು ಕಳೆದು ಹೋಗುವುದು. ಆದರೆ ಸಂಕೋಚಕ್ಕೊಳಗಾಗಿ ತಿಳಿಸುವುದೇ ಇಲ್ಲ. ಬಹಳ ಕೊಳಕು ಕೆಲಸಗಳನ್ನು ಮಾಡುತ್ತಾರೆ. ಬುದ್ಧಿಯಲ್ಲಿ ನೆನಪಂತೂ ಇರುತ್ತದೆ ಆದರೆ ಅದನ್ನು ತಿಳಿಸುವುದರಿಂದ ಶಿಕ್ಷೆಯಿಂದ ಮುಕ್ತರಾಗುವಿರಿ. ಇವರು ಅವಿನಾಶಿ ಸರ್ಜನ್ ಆಗಿದ್ದಾರೆ. ಇರುವ ಕಾಯಿಲೆಯನ್ನು ಸಂಕೋಚಕ್ಕೊಳಗಾಗಿ ಸರ್ಜನ್ಗೆ ತಿಳಿಸಲಿಲ್ಲವೆಂದರೆ ಅದು ಕಳೆಯುವುದಾದರೂ ಹೇಗೆ? ಯಾವುದೇ ವಿಕರ್ಮ ಮಾಡಿದ್ದರೂ ಸಹ ತಿಳಿಸುವುದರಿಂದ ಅರ್ಧ ಪಾಪವು ತುಂಡಾಗುವುದು. ತಿಳಿಸದೇ ಇದ್ದರೆ ಅದು ವೃದ್ಧಿಯಾಗುತ್ತಾ ಹೋಗುವುದು. ಹೆಚ್ಚು ಸಿಕ್ಕಿ ಹಾಕಿಕೊಳ್ಳುತ್ತಾ ಹೋಗುವಿರಿ ಮತ್ತೆ ಅದೃಷ್ಟವು ಸಮಾಪ್ತಿಯಾಗಿ ದುರಾದೃಷ್ಟವಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ – ದೇಹದೊಂದಿಗೂ ಸಂಬಂಧವನ್ನು ಇಡಬೇಡಿ.ಯಾವಾಗಲೂ ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮಿಂದ ಯಾವುದೇ ಕೆಟ್ಟ ಕೆಲಸವಾಗುವುದಿಲ್ಲ. ಇವರು ಧರ್ಮರಾಜನೂ ಆಗಿದ್ದಾರೆ, ಅವರೊಂದಿಗೂ ಮುಚ್ಚಿಡುತ್ತಾ ಇದ್ದರೆ ಮತ್ತೆ ನಿಮ್ಮಷ್ಟು ಶಿಕ್ಷೆ ಮತ್ತ್ಯಾರಿಗೂ ಸಿಗುವುದಿಲ್ಲ. ಸಮಯವು ಎಷ್ಟು ಸಮೀಪಿಸುತ್ತಾ ಹೋಗುವುದೋ ಎಲ್ಲರಿಗೂ ಸಾಕ್ಷಾತ್ಕಾರವಾಗುತ್ತಾಹೋಗುವುದು. ಈಗ ಎಲ್ಲರ ಅಂತಿಮ ಸಮಯವಾಗಿದೆ, ಎಲ್ಲರೂ ಪತಿತರಾಗಿದ್ದಾರೆ. ಪಾಪಗಳ ಶಿಕ್ಷೆಯು ಖಂಡಿತ ಸಿಗುತ್ತದೆ. ಹೇಗೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುವುದೋ ಹಾಗೆಯೇ ಒಂದು ಸೆಕೆಂಡಿನಲ್ಲಿ ಶಿಕ್ಷೆಗಳ ಈ ರೀತಿ ಅನುಭವವಾಗುತ್ತದೆ ಹೇಗೆ ಬಹಳ ಸಮಯದಿಂದ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ ಎಂಬಂತೆ. ಇದು ಬಹಳ ಸೂಕ್ಷ್ಮ ಮೆಷಿನರಿಯಾಗಿದೆ, ಎಲ್ಲರ ಅಂತಿಮ ಸಮಯವಾಗಿದೆ. ಶಿಕ್ಷೆಗಳನ್ನು ಖಂಡಿತವಾಗಿಯೂ ಅನುಭವಿಸಬೇಕಾಗಿದೆ ನಂತರ ಎಲ್ಲಾ ಆತ್ಮರು ಪವಿತ್ರರಾಗಿ ಹೊರಟು ಹೋಗುವರು. ತಂದೆಯು ಬಂದು ಪತಿತ ಆತ್ಮರನ್ನು ಪಾವನರನ್ನಾಗಿ ಮಾಡುತ್ತಾರೆ. ತಂದೆಯ ವಿನಃ ಮತ್ತ್ಯಾರಿಗೂ ಈ ಶಕ್ತಿಯಿಲ್ಲ. 63 ಜನ್ಮಗಳಿಂದ ಪಾಪಗಳನ್ನು ಮಾಡುತ್ತಾ-ಮಾಡುತ್ತಾ ಈಗ ಪಾಪದ ಕೊಡವು ತುಂಬಿದೆ. ಮಾಯೆಯ ಗ್ರಹಣವು ಎಲ್ಲರಿಗೂ ಹಿಡಿದಿದೆ. ದೊಡ್ಡ ಗ್ರಹಣವು ನಿಮಗೆ ಹಿಡಿದಿದೆ, ನೀವೇ ಸರ್ವಗುಣ ಸಂಪನ್ನರಾಗಿದ್ದಿರಿ, ನಿಮ್ಮ ಮೇಲೆ ಗ್ರಹಣ ಹಿಡಿದಿದೆ. ಜ್ಞಾನವೂ ಸಹ ಈಗ ನೀವು ಮಕ್ಕಳಿಗೆ ಸಿಕ್ಕಿದೆ. ತಂದೆಯು ತಿಳಿಸುತ್ತಾರೆ – ನೀವು ಭಾರತದ ಮಾಲೀಕರಾಗಿದ್ದಿರಿ ನಂತರ 84 ಜನ್ಮಗಳನ್ನು ನೀವು ತೆಗೆದುಕೊಂಡಿರಿ. ನೀವು ಅವಶ್ಯವಾಗಿ ದೇವಿ-ದೇವತಾ ಧರ್ಮದವರಾಗಿದ್ದಿರಿ, ಮತ್ತೆ ಪತಿತರಾದ ಕಾರಣ ಹಿಂದೂಗಳೆಂದು ಕರೆಸಿಕೊಂಡಿದ್ದಿರಿ ಎಂದು ತಂದೆಯು ನೇರವಾಗಿ ತಿಳಿಸುತ್ತಾರೆ. ಹಿಂದೂ ಧರ್ಮವನ್ನು ಯಾರೂ ಸ್ಥಾಪನೆ ಮಾಡಿಯೇ ಇಲ್ಲ. ಮಠಪಂಥಕ್ಕೆ ರಾಜಧಾನಿ ಎಂದು ಹೇಳುವುದಿಲ್ಲ. ರಾಜ್ಯವು ರಾಜರಿಗಿರುತ್ತದೆ. ಮೊದಲನೇ ಲಕ್ಷ್ಮೀ-ನಾರಾಯಣ, ಎರಡನೇ ಲಕ್ಷ್ಮೀ-ನಾರಾಯಣ……ಹೀಗೆ ರಾಜ್ಯವು ನಡೆಯುತ್ತದೆ. ಇದೂ ಸಹ ಅವಶ್ಯವಾಗಿದೆ, ಪಾವನರಿಂದ ಪತಿತರಾಗಲೇಬೇಕಾಗಿದೆ. ಪತಿತರಾಗುವ ಕಾರಣ ದೇವಿ-ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನೀವು ತಿಳಿದುಕೊಳ್ಳುತ್ತೀರಿ, ನಾವು ಪೂಜ್ಯ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ತಮ್ಮ ಧರ್ಮದ ಚಿತ್ರಗಳನ್ನೇ ಪೂಜಿಸುತ್ತಾರೆ. ನಾವೇ ಪೂಜ್ಯ ದೇವಿ-ದೇವತೆಗಳಾಗಿದ್ದೆವು, ಈಗ ಪೂಜಾರಿಗಳಾಗಿದ್ದೇವೆ ಎಂಬುದನ್ನೇ ಮರೆತು ಹೋಗಿದ್ದೇವೆ. ತಂದೆಯು ಆಸ್ತಿಯನ್ನು ಕೊಟ್ಟಿದ್ದರು, ನಂತರ ಪತಿತರಾದೆವು ಆದ್ದರಿಂದ ನಮ್ಮದೇ ಚಿತ್ರಗಳಿವೆ. ಕುಳಿತು ಪೂಜೆ ಮಾಡಿದೆವು ಎಂದು ನೀವೀಗ ತಿಳಿದುಕೊಳ್ಳುತ್ತೀರಿ. ತಾವೇ ಪೂಜ್ಯ, ತಾವೇ ಪೂಜಾರಿ. ಇದು ಭಾರತದ ವಿನಃ ಮತ್ತ್ಯಾರಿಗೂ ಹೇಳುವುದಿಲ್ಲ, ತಂದೆಯೂ ಸಹ ಭಾರತದಲ್ಲಿಯೇ ಬಂದು ಪುನಃ ದೇವಿ-ದೇವತೆಗಳನ್ನಾಗಿ ಮಾಡಲು ಜ್ಞಾನ ಕೊಡುತ್ತಾರೆ. ಉಳಿದೆಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹಿಂತಿರುಗಿ ಹೊರಟು ಹೋಗುತ್ತಾರೆ. ಆತ್ಮರೆಲ್ಲರೂ ಓ ಗಾಡ್ ಫಾದರ್ ಎಂದು ತಂದೆಯನ್ನು ಕರೆಯುತ್ತಾ ಇರುತ್ತಾರೆ. ಇದೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಸಮಯದಲ್ಲಿ ನಿಮಗೆ ಮೂವರು ತಂದೆಯರಿದ್ದಾರೆ, ಒಬ್ಬರು ಶಿವ ತಂದೆ, ಇನ್ನೊಬ್ಬರು ಲೌಕಿಕ ತಂದೆ ಮತ್ತು ಇವರು ಅಲೌಕಿಕ ತಂದೆ ಪ್ರಜಾಪಿತ ಬ್ರಹ್ಮಾನಾಗಿದ್ದಾರೆ. ಮತ್ತೆಲ್ಲರಿಗೆ ಇಬ್ಬರು ತಂದೆಯರಿದ್ದಾರೆ, ಲೌಕಿಕ ಮತ್ತು ಪಾರಲೌಕಿಕ. ಸತ್ಯಯುಗದಲ್ಲಿ ಕೇವಲ ಒಬ್ಬರೇ ಲೌಕಿಕ ತಂದೆಯಿರುತ್ತಾರೆ. ಪಾರಲೌಕಿಕ ತಂದೆಯನ್ನು ಅರಿತುಕೊಂಡೇ ಇಲ್ಲ. ಅಲ್ಲಂತೂ ಸುಖವೇ ಸುಖವಿರುತ್ತದೆ ಅಂದಮೇಲೆ ಮತ್ತೆ ಪಾರಲೌಕಿಕ ತಂದೆಯನ್ನು ಏಕೆ ನೆನಪು ಮಾಡುವರು! ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ, ಇಲ್ಲಿ ನಿಮಗೆ ಮೂವರು ತಂದೆಯರಿರುತ್ತಾರೆ, ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆ. ಅಲ್ಲಿ ಆತ್ಮಾಭಿಮಾನಿಯಾಗಿರುತ್ತಾರೆ, ನಂತರ ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ಇಲ್ಲಿ ನೀವು ಆತ್ಮಾಭಿಮಾನಿಗಳೂ ಆಗಿದ್ದೀರಿ, ಪರಮಾತ್ಮಾಭಿಮಾನಿಗಳೂ ಆಗಿದ್ದೀರಿ. ನಾವೆಲ್ಲರೂ ತಂದೆಯ ಮಕ್ಕಳಾಗಿದ್ದೇವೆ, ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನಿಮಗೆ ಶುದ್ಧ ಅಭಿಮಾನವಿದೆ. ತಂದೆಯು ಶಿಕ್ಷಕ, ಸದ್ಗುರುವೂ ಆಗಿದ್ದಾರೆ, ಅವರ ಮಹಿಮೆಯನ್ನೂ ಸಹ ತಿಳಿಸಬೇಕಾಗಿದೆ. ಅವರೇ ಬಂದು ಎಲ್ಲಾ ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ನಿಮಗೆ ಆಸ್ತಿಯಿತ್ತು, ನಂತರ 84 ಜನ್ಮಗಳನ್ನು ತೆಗೆದುಕೊಂಡು ಅದನ್ನು ಕಳೆದುಕೊಂಡಿದ್ದೀರಿ. ಇದನ್ನು ತಿಳಿಸುವುದು ಎಷ್ಟು ಸಹಜವಾಗಿದೆ, ತಂದೆಗೆ ಪತಿತ-ಪಾವನ, ಸರ್ವರ ಸದ್ಗತಿದಾತನೆಂದು ಹೇಳಲಾಗುತ್ತದೆ. ಈ ಪ್ರಪಂಚವೇ ಪತಿತರದಾಗಿದೆ. ಯಾರೂ ಸದ್ಗತಿ ಕೊಡಲು ಸಾಧ್ಯವಿಲ್ಲ. ಬಾಕಿ ಯಾರಾದರೂ ಬಹಳ ಶಾಸ್ತ್ರಗಳನ್ನು ಓದಿದ್ದರೆ ಅವರದು ಅಂತ್ಯಮತಿ ಸೋ ಗತಿಯಾಗುತ್ತದೆ. ನಂತರದ ಜನ್ಮದಲ್ಲಿ ಬಾಲ್ಯದಲ್ಲಿಯೇ ಎಲ್ಲವನ್ನೂ ಕಂಠಪಾಠ ಮಾಡಿ ಬಿಡುತ್ತಾರೆ. ತಂದೆಯು ನೀವು ಮಕ್ಕಳಿಗೆ ಎಷ್ಟು ಒಳ್ಳೆಯ ಮಧುರಾತಿ ಮಧುರ ಮಾತುಗಳನ್ನು ತಿಳಿಸುತ್ತಾರೆ – ಮಕ್ಕಳೇ, ನಿವು ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಈಗ ಪುನಃ ತಂದೆಯನ್ನು ನೆನಪು ಮಾಡಿರಿ ಆಗ ತುಕ್ಕು ಕಳೆಯುವುದು. ಈಗ ನಾಟಕವು ಪೂರ್ಣವಾಗುತ್ತದೆ. ಎಲ್ಲರೂ ಇಲ್ಲಿ ರಾಜರಾಗಬೇಕಾಗಿದೆ. ಕ್ರೈಸ್ಟ್ ಮೊದಲಾದವರೆಲ್ಲರ ಆತ್ಮಗಳು ಹಾಜರಿದ್ದಾರೆ, ಅವರೂ ಸಹ ತಂದೆಯ ಬಳಿ ಸಲಾಮು ಹೊಡೆಯಲು ಬರುವರು. ಅವರಂತೂ ಚಕ್ರವರ್ತಿ ರಾಜರಾಗುವುದಿಲ್ಲ, ಕೇವಲ ತಂದೆಯನ್ನು ನೆನಪು ಮಾಡುತ್ತಾರೆ. ಮನ್ಮನಾಭವದ ಮಂತ್ರವನ್ನು ತೆಗೆದುಕೊಂಡು ಹೋಗುತ್ತಾರೆ. ನಿಮ್ಮದು ಮನ್ಮನಾಭವ ಮತ್ತು ಮಧ್ಯಾಜೀಭವದ ಡಬಲ್ ಮಂತ್ರವಾಗಿದೆ. ತಂದೆಯು ಎಷ್ಟು ಒಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ನೀವು ಮಕ್ಕಳು ಯುದ್ಧದ ಮೈದಾನದಲ್ಲಿದ್ದೀರಿ, ಮಾಯಾ ರಾವಣನೊಂದಿಗೆ ನಿಮ್ಮ ಯುದ್ಧವಿದೆ, ಮಾಯೆಯು ಬಹಳ ವಿಘ್ನಗಳನ್ನು ಹಾಕುತ್ತದೆ. ಮಕ್ಕಳು ಬಹಳ ಸಾವಧಾನವಾಗಿರಬೇಕು.

2. ಪ್ರತಿಯೊಬ್ಬರೂ ತಮ್ಮ ಉನ್ನತಿಗಾಗಿ ವಿಚಾರ ಮಾಡಬೇಕು, ಚಿತ್ರಗಳಲ್ಲಿ ಹೇಗೆ ತಿಳಿಸಬೇಕು, ಸರ್ವೀಸನ್ನು ಹೇಗೆ ವೃದ್ಧಿ ಪಡಿಸಬೇಕು…… ಚಿತ್ರಗಳಲ್ಲಿ ಇಂತಹ ಯಾವ ಯುಕ್ತಿಯನ್ನು ರಚಿಸಬೇಕು, ಯಾವುದರಿಂದ ಮನುಷ್ಯರಿಗೆ ಸಹಜವಾಗಿ ಅರ್ಥವಾಗಬೇಕು.

ವರದಾನ:-

ಯಾರು ತಮ್ಮ ಶಿಕ್ಷಣ ಸ್ವರೂಪದ ಮೂಲಕ ಶಿಕ್ಷಣವನ್ನು ಕೊಡುವರು ಅವರೇ ಯೋಗ್ಯ ಶಿಕ್ಷಕರೆಂದು ಕರೆಯಲಾಗುವುದು. ಅವರ ಸ್ವರೂಪವೇ ಶಿಕ್ಷಣ ಸಂಪನ್ನವಾಗಿರುತ್ತದೆ. ಅವರು ನೋಡುವ-ನಡೆಯುವುದೂ ಸಹ ಯಾರಿಗಾದರೂ ಶಿಕ್ಷಣ ಕೊಡುತ್ತದೆ. ಹೇಗೆ ಸಾಕಾರ (ಬ್ರಹ್ಮಾ) ರೂಪದಲ್ಲಿ ಹೆಜ್ಜೆ-ಹೆಜ್ಜೆಯಲ್ಲಿಯೂ ಪ್ರತಿಯೊಂದು ಕರ್ಮವು ಪ್ರತ್ಯಕ್ಷವಾಗಿ ಶಿಕ್ಷಣದ ರೂಪದಲ್ಲಿ ನೋಡಿದೆವು, ಅದನ್ನು ಇನ್ನೊಂದು ಶಬ್ಧಗಳಲ್ಲಿ ಚರಿತ್ರೆಯೆಂದು ಹೇಳುತ್ತಾರೆ. ಯಾರಿಗೇ ಆದರೂ ವಾಣಿಯ ಮೂಲಕ ಶಿಕ್ಷಣ ಕೊಡುವುದಂತು ಸಾಮಾನ್ಯವಾದ ಮಾತಾಗಿದೆ ಆದರೆ ಸರ್ವರೂ ಅನುಭವವನ್ನು ಬಯಸುತ್ತಾರೆ. ಅಂದಮೇಲೆ ತಮ್ಮ ಶ್ರೇಷ್ಠ ಕರ್ಮ, ಶ್ರೇಷ್ಠ ಸಂಕಲ್ಪದ ಶಕ್ತಿಯಿಂದ ಅನುಭವ ಮಾಡಿಸಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top